ತಿ.ನರಸೀಪುರ: | KSIC ಕಾರ್ಖಾನೆ ಉಳಿವಿಗಾಗಿ ಎಂತಹ ಹೋರಾಟಕ್ಕೂ ಸಿದ್ದ- BJP ಮುಖಂಡ ಡಾ.ರೇವಣ್ಣ |
1912ರಲ್ಲಿ ನಾಲ್ವಡಿ ...ಕೃಷ್ಣರಾಜ ಒಡೆಯರು ನಿರ್ಮಿಸಿದ ಈ ಫ್ಯಾಕ್ಟರಿ ವಿಶ್ವದಲ್ಲಿ ಖ್ಯಾತಿ ಪಡೆದಿದೆ ಇಂತಹ ಫ್ಯಾಕ್ಟರಿಯನ್ನು ಮುಚ್ಚಿ ಸಾವಿರಾರು ಕುಟುಂಬಗಳ ಬೀದಿ ಪಾಲು ಮಾಡುವ ಸರ್ಕಾರದ ನಿರ್ಧಾರವನ್ನು ಖಂಡಿಸಿದರು.
ನಾವು ಕ್ರೀಡಾಂಗಣ ಮಾಡೋದು ಬೇಡ ಎನ್ನುವ ವಿರೋಧಿಗಳಲ್ಲ. ನಮ್ಮ ತಾಲ್ಲೂಕಿನ ಕ್ರೀಡಾಪಟುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ವಿಶ್ವಕಪ್ ತಂದಿರುವುದು ಇಡೀ ವಿಶ್ವಕ್ಕೆ ಗೊತ್ತಿರುವ ವಿಚಾರ ಮತ್ತು ಮಾದರಿ ತಾಲೂಕು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವಂತ ಇಂತಹ ತಾಲೂಕಿನಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಮಾಡಿ, ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡದೆ ಬೇಕಾಬಿಟ್ಟಿ ನಿರ್ಮಾಣಕ್ಕೆ ಮುಂದಾಗಿರುವ ಸರ್ಕಾರದ ತೀರ್ಮಾನಕ್ಕೆ ನಮ್ಮ ವಿರೋಧವಿದೆ. ಆದ್ದರಿಂದ ಸರಕಾರ ಕೂಡಲೇ ಈ ತೀರ್ಮಾನವನ್ನು ಕೈ ಬಿಡಬೇಕು ಇಲ್ಲದಿದ್ದಲ್ಲಿ ಎಂತ ಹೋರಾಟಕ್ಕೂ ಸಿದ್ಧ ಎಂದು ಹೇಳಿದರು.
ಈ ಸಮಯದಲ್ಲಿ ತಾಲ್ಲೂಕು ಬಿಜೆಪಿ ಮಂಡಲದ ಪದಾಧಿಕಾರಿಗಳು ಹಾಜರಿದ್ದರು.
#karnataka #news #kannadanews #india #mysore #entertainment #breakingnews #congressgovernment #karnatakanews #latestnews #hcmahadevappa #cmsiddaramaiah #sports #ground #protest #bjpShow More






