
ಮೈಸೂರು: ತಿ.ನರಸೀಪುರ ಪಟ್ಟಣದಲ್ಲಿ ನ್ಯಾಯಾಲಯದ ಮುಂಭಾಗ ದಿನಾಂಕ:04-02-2026 ರಂದು ಮಧ್ಯಾಹ್ನ ತಾಲೂಕು ವಕೀಲರ ಸಂಘದ ಅಧ್ಯಕ್ಷ ಮಹದೇವಸ್ವಾಮಿ ರವರನ್ನು ತೊಟ್ಟವಾಡಿ ಗ್ರಾಮದ ಸಂತೋಷ್ ಎಂಬ ವ್ಯಕ್ತಿ ಉಸಿರು ಕಟ್ಟಿಸಿ ಸಾಯಿಸಲು ಪ್ರಯತ್ನಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ನೊಂದ ವ್ಯಕ್ತಿಯ ಹೇಳಿಕೆ ಪ್ರಕಾರ ಎಫ್ ಐ ಆರ್ ದಾಖಲೆ ಮಾಡದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ತಾಲ್ಲೂಕು ವಕೀಲ ಸಂಘದ ಉಪಾಧ್ಯಕ್ಷ ಶಾಂತ ನಾಗರಾಜು ತಿಳಿಸಿದ್ದಾರೆ.
https://youtu.be/A9SYs8qp7dg?si=ocehTi89W45w5bkM
ಪಟ್ಟಣದ ಎದುರು ನಮ್ಮ ಸಂಘದ ಅಧ್ಯಕ್ಷರು ಹೇಳಿಕೆ ನೀಡವ ಪರಿಸ್ಥಿತಿ ಇಲ್ಲದಿದ್ದರೂ ಸಹ ಹೇಳಿಕೆ ನೀಡಿದ್ದಾರೆ ಇವರು ಹೇಳಿಕೆ ಪ್ರಕಾರ ಎಫ್ಐಆರ್ ದಾಖಲಿಸದೆ, ಅವರಿಗೆ ಬೇಲ್ ಸಿಕ್ಕುವ ರೀತಿಯಲ್ಲಿ ಎಫ್ಐ ಅರ್ ಹಾಕಿದ್ದಾರೆ. ಇದರ ವಿರುದ್ಧ ನಾವು ಕರ್ನಾಟಕ ರಾಜ್ಯದಾದ್ಯಂತ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಈ ಸಮಯದಲ್ಲಿ ಸಂಘದ ಉಪಾಧ್ಯಕ್ಷ ಶಾಂತನಾಗರಾಜು, ಕಾರ್ಯದರ್ಶಿ ಸೋಮಣ್ಣ, ಖಜಾಂಚಿ ಮಹದೇವಸ್ವಾಮಿ, ವಕೀಲರುಗಳಾದ ಪಾಲಕ್ಷ ಮೂರ್ತಿ,ರವಿಶಂಕರ್, ಉಮೇಶ್, ಬಸವರಾಜು, ಸಿದ್ದಪ್ಪಾಜಿ, ನಂದೀಶ್, ಭುವನೇಶ್, ಮಹೇಶ,ಚಿನ್ನಸ್ವಾಮಿ,ರವಿ, ಮಹದೇವಸ್ವಾಮಿ, ಶಶಿಧರ್ ಸಿದ್ದರಾಜು, ಕೃಷ್ಣಮೂರ್ತಿ, ಪರಶಿವಮೂರ್ತಿ ಉದಯಕುಮಾರ್ ಇನ್ನು ಕೆಲವು ವಕೀಲರು ಹಾಜರಿದ್ದರು.
#karnataka #india #news #breakingnews #mysore #latestnews #kannadanews #advocate #protest #attempt #attempts #worldwide





