
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ದಟ್ಟ ಅರಣ್ಯ ಚೋರ್ಲಾ ಘಾಟ್ನಲ್ಲಿ ಸಿನಿಮಾ ಶೈಲಿಯಲ್ಲಿ ನಡೆದ ಮಹಾ ದರೋಡೆಯೊಂದು ಬೆಳಕಿಗೆ ಬಂದಿದೆ. 2025ರ ಅಕ್ಟೋಬರ್ 16ರಂದು ಗೋವಾದಿಂದ ಮಹಾರಾಷ್ಟ್ರಕ್ಕೆ ಸಾಗುತ್ತಿದ್ದ ಎರಡು ಕಂಟೇನರ್ಗಳಲ್ಲಿ 400 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ನಿಷೇಧಿತ 2,000 ರೂಪಾಯಿ ನೋಟುಗಳನ್ನು ಹೈಜ್ಯಾಕ್ ಮಾಡಲಾಗಿದೆ.
ಮೂಲಗಳ ಪ್ರಕಾರ, ಈ ಬೃಹತ್ ಮೊತ್ತ ಮಹಾರಾಷ್ಟ್ರದ ಪ್ರಮುಖ ರಿಯಲ್ ಎಸ್ಟೇಟ್ ಉದ್ಯಮಿ ಕಿಶೋರ್ ಶೇಟ್ ಅವರಿಗೆ ಸೇರಿತ್ತು. ದರೋಡೆಯ ನಂತರ ಹಲವು ತಿಂಗಳುಗಳ ಕಾಲ ರಹಸ್ಯವಾಗಿರುವುದು ಈಗ ದಾಖಲೆಗಳಲ್ಲಿ ಬೆಳಕಿಗೆ ಬಂದಿದ್ದು, ತನಿಖಾ ಸಂಸ್ಥೆಗಳನ್ನು ಆಶ್ಚರ್ಯಕೊಳಿಸಿದೆ.
ನಿಷೇಧಿತ ನೋಟುಗಳ ದೊಡ್ಡ ಸಾಗಾಟ ಹೇಗೆ ಸಾಧ್ಯವಾಯಿತು? ಹಿಂದೆ ಯಾರ ಕೈವಾಡ? ಎಂಬ ಪ್ರಶ್ನೆಗಳು ಎದ್ದಿವೆ. ಚೋರ್ಲಾ ಘಾಟ್ನ ಅಪಾಯಕಾರಿ ಬೆಟ್ಟ-ಅರಣ್ಯ ಮಾರ್ಗದಲ್ಲಿ ಕಂಟೇನರ್ಗಳು ನಾಪತ್ತೆಯಾಗಿವೆ.
ಅಂತಾರಾಜ್ಯ ಅಪರಾಧವಾದ್ದರಿಂದ ಕರ್ನಾಟಕ, ಗೋವಾ, ಮಹಾರಾಷ್ಟ್ರ ಪೊಲೀಸರು ಜಂಟಿ ಎಸ್ಐಟಿ ರಚಿಸಿ ತೀವ್ರ ತನಿಖೆಗೆ ಶುರು ಮಾಡಿದ್ದಾರೆ. CCTV ಫೂಟೇಜ್, ಚಾಲಕರ ವಿಚಾರಣೆ, ಮೊಬೈಲ್ ಟ್ರ್ಯಾಕಿಂಗ್ ಮತ್ತು ಡ್ರೋನ್ ಶೋಧ ನಡೆಸಲಾಗುತ್ತಿದೆ. ಈ ಕೇಸ್ ಕಪ್ಪುಬಜೆಟ್ನ ಹೊಸ ಜಾಲವನ್ನು ಬಹಿರಂಗಪಡಿಸಬಹುದು ಎಂದು ತಜ್ಞರು ಅಂದಾಜಿಸುತ್ತಾರೆ.
ವರದಿ :- ಆಂಟೋನಿ ಪತ್ರಕರ್ತ





